ಈಗಷ್ಟೆ ಮುಗಿದಿದೆ ಉರಿಬೇಸಿಗೆ

ಈಗಷ್ಟೆ ಮುಗಿದಿದೆ ಉರಿಬೇಸಿಗೆ
ಸೀದುಹೋಗಿದೆ ನೆಲ ಅದರ ಧಗೆಗೆ
ಮೇಲೆ ತೇಲುವ ಮುಗಿಲು
ಕೆಳಗೆ ಥಣ್ಣಗೆ ಸುರಿದು
ತನ್ನ ಉಳಿಸುವುದೆಂದು ಧರೆ ನಂಬಿದೆ
ಹಾಗೇ ನಾನೂ ನಿನಗೆ ಕಾಯುತಿರುವೆ.

ತಾಗಿತೋ ಹೇಗೆ ಈ ನೆಲದ ವಿರಹ?
ಬಾನಲ್ಲಿ ಮೂಡುತಿದೆ ಮಳೆಯ ಬರೆಹ!
ಕರಿಯ ಗಿರಿಗಳ ದಂಡು
ಓಡಿ ಬರುವುದ ಕಂಡು
ನಾಚಿ ಕೆಂಪಾಗಿದೆ ನೆಲದ ಮೋರೆ
ಹಾರುತಿದೆ ಗಾಳಿಗ ಉಟ್ಟ ಸೀರೆ!

ತುಂಬಿ ಹರಿದಿದೆ ನದಿ ದಡಕೆ ತುಡಿದು
ಅಪ್ಪಿಕೊಳುತಿದೆ ಬಾಚಿ ಒಲವ ನುಡಿದು
ಹೂಗೊಂಚಲನು ನೀಡಿ
ಗಾಳಿ ತಂದಿದೆ ಗಂಧ
ತಬ್ಬೋ ಗಿರಿಧರ ಬಂದು ಒಳಗಿನಿಂದ
ಉಸಿರುಗಟ್ಟಿಸು ನಿನ್ನ ಬಿಗಿತದಿಂದ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ-೧೩೯
Next post ಹೊಗೆ ಇಲ್ಲದ ವಿದ್ಯುತ್ ಕಾರು ರೆವಾ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys